19 ಫೆಬ್ರವರಿ 2011

ನನ್ನ ಓದು..

                
                             ಕೈಲಾಸಂ ಅವರ "ಟೊಳ್ಳು ಗಟ್ಟಿ" 



ಕನ್ನಡ ಸಾಮಾಜಿಕ ನಾಟಕ ಪರಂಪರೆಗೆ ಭದ್ರ ಬುನಾದಿಯನ್ನು ಹಾಕಿದ ಕೀರ್ತಿ  ಕೈಲಾಸಂ  ಅವರಿಗೆ ಸಲ್ಲುತ್ತದೆ .ಸಮಕಾಲಿನ ಸಮಸ್ಯೆಗಳ ಗಂಭೀರ ಚರ್ಚೆ ಹಾಗು ಪರಿಶೋಧನೆಯನ್ನು  ಅವರ ನಾಟಕಗಳಲ್ಲಿ ಗುರುತಿಸಬಹುದು.
ಕೈಲಾಸಂ ಈ ನಾಟಕದಲ್ಲಿ ತಮ್ಮನ್ನು "ಪ್ರಹಸನ ಪಿತಾಮಹ" ಎಂದು ಕರೆದುಕೊಂಡಿದ್ದಾರೆ .ಸಮಕಾಲೀನ ಸಮಾಜದ ಅಂಕುಡೊಂಕುಗಳನ್ನು ಹಾಸ್ಯಮಯವಾಗಿ  ಚಿತ್ರಿಸಿರುವದನ್ನು ಕಾಣಬಹುದು. ಹಾಸ್ಯದ ಮೂಲಕ ಬದುಕಿನ ಗಂಭೀರ ವಿಶ್ಲೇಷಣೆಯನ್ನು ನಡೆಸುತ್ತಾರೆ. 'ಬದುಕಿನಲ್ಲಿ ಎದುರಾಗುವ ಕಣ್ಣೀರಿನ ಕಡಲನ್ನು ಹಾಸ್ಯದ ಹರಿಗೋಲಿನಿಂದ ದಾಟಬೇಕೆಂಬುದು  ಕೈಲಾಸಂರವರ ಆದರ್ಶವಾಗಿತ್ತು'
 "ಟೊಳ್ಳುಗಟ್ಟಿ" ಕೈಲಾಸಂ ಅವರ ಎಲ್ಲ ನಾಟಕಗಳ ಆಶಯವನ್ನೂ ಪ್ರತಿನಿಧಿಸುವಂಥಹ ನಾಟಕವಾಗಿದೆ. ಪಾಶ್ಚಿಮಾತ್ಯ ಪ್ರಭಾವದಿಂದ ಪುರಾತನ ಭಾರತೀಯ ಸಂಸ್ಕ್ರತಿಯನ್ನು.... ಅಲ್ಲೋಲಕಲ್ಲೋಲ ಮಾಡಿದ ಕ್ರಮ.. ಜನಜೀವನದ ವೈಪರೀತ್ಯ.. ಹೀಗೆ ಆಧುನಿಕ  ಜಗತ್ತೂ... ಆಧುನಿಕ  ಶಿಕ್ಷಣದ  ಎಲ್ಲ ಸಾಧ್ಯತೆಗಳನ್ನು ಅನಾವರಣ ಮಾಡುವ ಶೈಲಿ ಇಷ್ಟವಾಗುತ್ತದೆ.
"ಟೊಳ್ಳುಗಟ್ಟಿ"ಯ ಹಿರಿಯಣ್ಣಯ್ಯ ನ ಮಕ್ಕಳಾದ ಪುಟ್ಟು , ಮಾಧು- ಎರಡು ವೈರುಧ್ಯದ ಪಾತ್ರಗಳು!ತಂದೆಯ ಪ್ರೀತಿ ಪಾತ್ರನಾದ   ಪುಟ್ಟು.. ಓದಿನಲ್ಲಿ ಮುಂದು.ಬದುಕಿನಲ್ಲಿ ಸ್ವಾರ್ಥಿ. ಓದಿನಲ್ಲಿ ಹಿಂದೆ ಉಳಿಯುವ .. ಉಳಿದಿದ್ದ ಮಾಧು.. ಪರೋಪಕಾರಿ.
ಈ ಎರಡು ವಿಭಿನ್ನ ಪಾತ್ರಗಳ ಮೂಲಕ ಈ ನಾಟಕವನ್ನು ಹೆಣೆಯಲಾಗಿದೆ. ಪುಟ್ಟುವಿನ ಹೆಂಡತಿ ಪಾತು... ಮಾಧುವಿನ ಹೆಂಡತಿ ಸಾತು... ಅವರ ಮಾತುಕತೆಗಳು... ತುಂಬಾ ಸ್ವಾರಸ್ಯಕರವಾಗಿದೆ . ಇವರ ಮನೆಗೆ ಬೆಂಕಿ ಬೀಳುವ ಸನ್ನಿವೇಶ " ಅಗ್ನಿಪರೀಕ್ಷೆ" ಯಂತಿದೆ . ಈ ಜೀವನ ಪರೀಕ್ಷೆಯಲ್ಲಿ  ಮಾಧೂ ನಾಯಕನಂತೆ ಕಾಣಿಸುತ್ತಾನೆ!. ಮನೆಗೆ ಬೆಂಕಿ ಬಿದ್ದಿದೆಯೆಂದು ತಿಳಿದ ತತ್ ಕ್ಷಣ ರೋಗಿಯಾದ ತಾಯಿಯನ್ನು, ಹಸುಳೆಯನ್ನು  ಲೆಕ್ಕಿಸದೆ ತನ್ನ ಪುಸ್ತಕವನ್ನಷ್ಟೇ ಬಾಚಿಕೊಂಡು ಪುಟ್ಟು ಹೊರಕ್ಕೆ ಓಡುತ್ತಾನೆ. ಮಾಧು  ಮನೆಯವರನ್ನು ರಕ್ಷಿಸಲು ತನ್ನ ಜೀವದ ಹಂಗು ತೊರೆದು ಹೋರಾಡುತ್ತಾನೆ.

ಈ ನಾಟಕವನ್ನು ಓದಿದಂತೆ ಇಲ್ಲಿರುವ ಪಾತ್ರಗಳು ನಮ್ಮ ಮನೆಯಲ್ಲೋ ... ಪಕ್ಕದ ಮನೆಯಲ್ಲೋ... ಒಟ್ನಲ್ಲಿ ನಮ್ಮ ಸುತ್ತಮುತ್ತ ನಡೆಯುವ ಘಟನೆಏನೋ... ಅನ್ನುವಷ್ಟು.. ಹತ್ತಿರವೆನಿಸುತ್ತೆ.  ಕೈಲಾಸಂ ಅವರ ಭಾಷೆ..ಶೈಲಿ... ಇಷ್ಟವಾಗತ್ತೆ. " ಪಾಶ್ಚಾತ್ಯ ಪ್ರಭಾವದಿಂದ ಒಮ್ಮೊಮ್ಮೆ ಬೆಂಕಿ ಬಿದ್ದ ಮನೆಯಂತಾಗಿರುವ ನಮ್ಮ ಮನಸು... ಆಶೆ ... ಅಂತಸ್ತುಗಳು... ಸಮಾಜ... ಇವೆಲ್ಲವನ್ನೂ ಸುಸೂತ್ರವಾಗಿ ಒಳ್ಳೆದಾರಿಗೆ ಕೊಂಡೊಯ್ಯಲು ಮಾಧುವಿನಂಥಹ ಧೀರರು ಅವಶ್ಯಕ.. ಪುಟ್ಟುವಿನಂಥಹ ಪುಸ್ತಕದ ಹುಳುಗಳು ಅಲ್ಲಾ ಎಂಬುದನ್ನು ಈ ನಾಟಕ ಚೆನ್ನಾಗಿ ಧ್ವನಿಸುತ್ತದೆ.

                                                         ಇನ್ನು ಗ್ರಹಿಕೆಯ ಅಡಿಯಲ್ಲಿ  ಚಿಂತನೆ .... ನಡೆಯುತ್ತಿದೆ....
                                                            ಚಂದ್ರಿಕಾ ಹೆಗಡೆ



7 ಕಾಮೆಂಟ್‌ಗಳು:

  1. ಕೈಲಾಸಂ ಅವರ ಟೊಳ್ಳುಗಟ್ಟಿಯ ಬಗೆಗೆ ಉತ್ತಮ ವಿವರಣೆ ನೀಡಿರುವಿರಿ. ಅವರ ಇತರ ನಾಟಕಗಳ ಬಗೆಗೂ ತಿಳಿಸಿರಿ.

    ಪ್ರತ್ಯುತ್ತರಅಳಿಸಿ
  2. Chandrika avre,

    ee naatakavannu naanu odiddene, tumbaa chennagide, nimma vivarane tumbaane chennagide. Nanna blog ge bandu sundara pratikriye neediddakke dhanyavadgalu...

    ಪ್ರತ್ಯುತ್ತರಅಳಿಸಿ
  3. ಕೈಲಾಸಂ ಅವರ ನಾಟಕದ ಬಗ್ಗೆ ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  4. anjanaa... thank.. u... innomme avara innitara naatakagalannu odi ... grahisiddannu barahakke ilisuva prayatna maaduttene... hige baruttiri... bareyuttiri...

    ಪ್ರತ್ಯುತ್ತರಅಳಿಸಿ