ಮಲ್ಲಿಗೆಯ ಮಾಲೆಯನು ಹಿಡಿದು ನಿನ್ನಲ್ಲಿ ಬಂದೆ
ನೀನು ಕಾಯುವ ಹಾದಿ ನಾ ಬಲ್ಲೆನಲ್ಲ.
ನಾ ಹಿಡಿದ ಮಲ್ಲಿಗೆಯು ನಿನ್ನಲ್ಲಿಯ ಸಂಪಿಗೆಯು ಏರುವವು ಊರ ಮುಂದಿನ ದೇವರಿಗೆಯೇ!
ನಾ ಹೇಳುವ ಮಾತು ನಿನ್ನಲ್ಲಿಯೂ ಇದೆ
ಸಿರಿತನಕ್ಕೂ ಮಿಗಿಲಾಗಿದೆ ನಿನ್ನಲ್ಲಿಯ ಸ್ನೇಹ .
ಮನ ಹಗುರಾಗಲು ,ತನುವಿಗೆ ಹಿತವೆನಿಸಲು
ನಿನ್ನದೊಂದು ಸ್ಪರ್ಶ ಸಾಕೆನಲೇ?
ಅಂದು ಹಿಂದಿನ ಮಾತು ಸಂದರ್ಭಕ್ಕನುಸಾರಿ
ಪುನಃ ಏಳುವ ಭಾವ ಪ್ರೀತಿಯೊಂದೇ.
ನೀನು ಸಂಯಮಿ, ನಾನು ಸ್ನೇಹಾಕಾಂಕ್ಷಿ
ನಮ್ಮಿಬ್ಬರ ಮನವೀಗ ಹಾಯಾಗಲು.
ಬಂದ ಭಾವಕ್ಕೊಂದು ರೂಪುಕೊಡಲೆಮಗೆ
ಸಂಪ್ರೀತವೆನಿಸಿದೆ ಜೀವಕ್ಕೆಲ್ಲ .
ದೊರೆತ ಹಿರಿಯರ ಹಾರೈಕೆ, ಜತೆಯಿರಲು ನಮಗೇಕೆ
ಜೋಕೆ ಎನ್ನುವ ಮಾತು ಇನ್ನು ಬೇಕೇ.? ......
ಪ್ರೀತಿಯ ಸಿರಿತನದ ಸವಿಯಲ್ಲಿ....
ಚಂದ್ರಿಕಾ ಹೆಗಡೆ .
good one
ಪ್ರತ್ಯುತ್ತರಅಳಿಸಿpathikanige sundara kavana
ye... thanks kano...
ಪ್ರತ್ಯುತ್ತರಅಳಿಸಿನಿಮ್ಮ ಬ್ಲಾಗ್ ಗೆ ನನ್ನ ಆಕಸ್ಮಿಕ ಮತ್ತು ಮೊದಲನೇ ಭೇಟಿ :)
ಪ್ರತ್ಯುತ್ತರಅಳಿಸಿನಿಮ್ಮ ಕವನಗಳನ್ನ ಓದಿದೆ ತುಂಬಾ ಇಷ್ಟವಾಯ್ತು :)
ಶುಭವಾಗಲಿ
aakasmika? ok. thanks... nimma kavanakudaa tumbaa chennagide..
ಪ್ರತ್ಯುತ್ತರಅಳಿಸಿ