03 ಫೆಬ್ರವರಿ 2011

ಸ್ವಾತಂತ್ರ್ಯ




ತಲುಪಲೇ ಬೇಕು ತಿಳಿದಲ್ಲಿಗೆ
ಬೇಕಾದ ಅಗಲಳತೆಗಳಲ್ಲಿ ಹೋಗುವ
ಮನ ಹುಮ್ಮಸ್ಸನ್ನು ಕೈಯಲ್ಲಿ ಹಿಡಿದು ,
ಕ್ಷಣ , ಕೊಂಚ ತಪ್ಪಿದರೂ
ನೋವು- ಸಾವು ಕಟ್ಟಿಟ್ಟ ಬುತ್ತಿ
ದಾರಿ- ಗೆರೆ ಎಳೆದಿದೆಯಲ್ಲ !
ಮಾರ್ಗದರ್ಶಿ ಯಾಕೆ ? ಹೌದಲ್ಲ.
ಕಗ್ಗತ್ತಲಿನ ದುರ್ಗಮ ದಾರಿ
ಮುಗಿದಿದೆ. ಚಿಂತೆ ಬಿಡು .
ಬೆಳಕಿನ ಸ್ವಚ್ಛಂದತೆ ಸಿಗಲಿದೆ
ಕ್ಷಣಾರ್ಧದಲ್ಲಿಯೇ
ಮನದ ಬೇಗುದಿಯ ಬಿಸುಡಿಬಿಡು
ಸ್ನಿಗ್ಧತೆ, ಸ್ವತಂತ್ರತೆ ಹೊರಗಿದೆಯಲ್ಲ
ನಡೆಯುತ್ತೀಯಾ ? ಓಡುತ್ತಿರುವೆಯಾ !
ಬೆಳಕಿನ ಸನಿಹ ಜಾರುತ್ತಿರುವೆ-
ತಿಳಿದಿದೆ ನನಗೆ
ನೀನು ಬಂದ, ನಿನಗೆ ಸಂದ
ಕಷ್ಟ ಕೋಟಲೆಗಳ ಪರಿ
ನೆನಪಾಗದಿರಲಿ ಮತ್ತೊಮ್ಮೆ
ಹಳೆಯ ಬೇಗೆ - ಉಸಿರುಗಟ್ಟಿಸುವಿಕೆ
ದಾಟಿ ಬಿಡು ಕತ್ತಲೆಯ ಮನಸ್ಥಿತಿಯ
ಸ್ವಚ್ಚ ನಿಸರ್ಗಧಾರೆಯಲ್ಲಿ
ಒಂದಾಗಿ ಬಿಡು
ಸರ್ವ ತಂತ್ರ ಸ್ವತಂತ್ರವಾಗಿ ...

ಸ್ವತಂತ್ರತೆಯ ಸದಾ ಅನುಭವದಲ್ಲಿ...
    ಚಂದ್ರಿಕಾ ಹೆಗಡೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ