ಭಾವಕ್ಕೆ ವೇಷ ತೊಡಿಸಿ
ಸಿಕ್ಕಿದ್ದನೆಲ್ಲಾ ಬಯಲಿನಲ್ಲಿ ತೆರೆದಿಡಬೇಡ...
ಬಿರುಗಾಳಿ ಬಂದು ತರಗೆಲೆಯಾಗಿ
ಚಿಂದಿಯಾದೀತು ಜೋಕೆ!
ಹೆಣೆದ ಮಾತನ್ನು ಹಂಚಿಕೊಳ್ಳದಿರು
ಬಲೆಯಲ್ಲಿಯ ಮೀನಿನಂತೆ
ನಿನ್ನ ಮನ ವಿಲಿ ವಿಲಿ ಒದ್ದಾಡೀತು ಜೋಕೆ!
ಸಿಕ್ಕಂತೆ ಸಿಕ್ಕರೂ ಜನ
ಸ್ನೇಹಿತರು, ಗೆಳೆಯ-ಗೆಳತಿಯರು
ಕುದಿವ ಮನಕೆ ಆರೈಕೆ ನೀಡಲು
ತಣಿಯದಿರು....
ಕಾದ ಎಣ್ಣೆಯಲ್ಲಿ ಹಾಕಬಹುದು ಹುಷಾರು!
ಹೋಳಿಗೆ ನೀಡುವ ನೆಪದಲಿ--
ಕಾದ ಕಬ್ಬಿಣವ ಕಿವಿಗಿಡಬಹುದು,
ಗಾಯದ ಮೇಲೆ ಬರೆಯೂ .....
ಜತನವೆಂಬುದು ನಿನ್ನ ಜವಾಬ್ದಾರಿ...
..............................................ಚಂದ್ರಿಕಾ ಹೆಗಡೆ
ಹೆಣೆದ ಮಾತನ್ನು ಹಂಚಿಕೊ0ಡು ಬಿಟ್ಟಿರಲ್ಲ...ಹಹಹ್ಹಾ...ಚೆನ್ನಾಗಿದೆ
ಪ್ರತ್ಯುತ್ತರಅಳಿಸಿಸರಿಯಾದ ಎಚ್ಚರಿಕೆಯನ್ನು ಮಧುರವಾಗಿ ಹೇಳಿರುವಿರಿ!
ಪ್ರತ್ಯುತ್ತರಅಳಿಸಿಧನ್ಯವಾದಗಳು sunaath ಸರ್ ತಮ್ಮ ಅಭಿಪ್ರಾಯಕ್ಕೆ...ಎಚ್ಚರಿಕೆಯನ್ನು ಮಧುರತೆಯಲ್ಲಿ ಹೇಳುವ ಪ್ರಯತ್ನ ಅಸ್ಟೆ.
ಪ್ರತ್ಯುತ್ತರಅಳಿಸಿDigwas hegde .... ಹೆಣೆದ ಮಾತನ್ನು ಎಚ್ಚರಿಕೆಯಿಂದಲೇ ಹೆಣೆದಿರುವೆ.... ಬೆಣ್ಣೆಯಲ್ಲಿ ನೂಲನ್ನು ಎಳೆದಂತೆ....
ಪ್ರತ್ಯುತ್ತರಅಳಿಸಿsundara kavana
ಪ್ರತ್ಯುತ್ತರಅಳಿಸಿecharavaagiru joke :)
thank u friend....
ಪ್ರತ್ಯುತ್ತರಅಳಿಸಿ